ಅಂದಿನ ಜನಪ್ರಿಯ ಕನ್ನಡ ಚಿತ್ರ ?ಬಣ್ಣದ ಗೆಜ್ಜೆ? ಹಾಡಿನ ಸಾಲು ?ಪ್ರೇಮ ಗೀಮಾ ಜಾನೆ ದೊ? ಈಗ ಚಲನಚಿತ್ರ ಶೀರ್ಷಿಕೆ ಆಗಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ನಾಳೆಯಿಂದ ತೆರೆಗೆ ಬರುತ್ತಿದೆ ಹೊರೈಜಾನ್ ಫಿಲ್ಮ್ಸ್ ಅಡಿಯಲ್ಲಿ.
ಇದು ಕೆಂಜ ಚೇತನ್ ಕುಮಾರ್ ಅವರ ಮೊದಲ ಪ್ರಯತ್ನ. ಕಥೆ, ಚಿತ್ರಕಥೆ, ನಿರ್ದೇಶನ ಮಾಡಿರುವ ಇವರು ೯ ವರ್ಷಗಳ ಕಾಲ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನಿರ್ದೇಶಕರ ಪ್ರಕಾರ ಯುವಕರ ಜೀವನದಲ್ಲಿ ನಾಲ್ಕು ಹಂತಗಳು. ಅದರಲ್ಲಿ ಒಂದು ಹಂತವನ್ನು ಮಾತ್ರ ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಈ ಚಿತ್ರಕ್ಕಾಗಿ ೨೭ ಮಂದಿ ಹಣ ಹೂಡಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಪೂರ್ಣಚಂದ್ರ ತೇಜಸ್ವಿ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ರುದ್ರಮುನಿ ಅವರು ಛಾಯಾಗ್ರಹಣ ಮಾಡಿದ್ದಾರೆ. ವಿಶ್ವ ಅವರ ಸಂಕಲನ, ಕೌರವ ವೆಂಕಟೇಶ್ ಅವರ ಸಾಹಸ ಈ ಚಿತ್ರಕ್ಕಿದೆ. ಗೌತಮ್, ಶ್ರುತಿ ತಿಮ್ಮಯ್ಯ, ಪಲ್ಲವಿ ಗೌಡ, ಶೀತಲ್ ಶೆಟ್ಟಿ, ರಮೇಶ್ ಭಟ್, ಪ್ರಶಾಂತ್ ಸಿದ್ದಿ, ಸುಧಾಕರ್, ಕಿಷನ್ ಸಿಂಗ್, ಸಂಗೀತ, ಮನದೀಪ್ ರಾಯ್, ಅನಂತ ವೇಲು ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.